Skip to main content

Posts

ಐಟಿ_ದಾಳಿ

ದಾಳಿ ದಾಳಿ ದಾಳಿ ದಾಳಿ IT ದಾಳಿ.... ಬಿಡುಸ್ತಾ ಅವ್ರೆ ಮೆಟ್ಕೊಂಡಿದ್ದ ಹುಚ್ಚು ಗಾಳಿ. ಯಾಕ್ರೋ ಬೇಕು ನಿಮ್ಗೆ ಅಷ್ಟು ಕಾಸು, ನೋಡ್ತಾ ಅವ್ನೆ ಮೇಲ್ ಕೂತ್ಕೊಂಡು ನಮ್ಮ ಬಾಸು. ತಗ್ಗಿ ಬಗ್ಗಿ ನಡುದ್ರೆ ನೀವು Fullu ಕ್ಲಾಸು, ಇಲ್ಲ ಅಂದ್ರೆ ಟೋಟಲ್ ಲಾಸ್ಸು... ಟೋಟಲ್ ಲಾಸ್ಸು ಮಗಾ ಕೇಶವ....
Recent posts

ಸಾರಾಯಿ_ನೀ ಸಾಯಿ

ಕುಡಿಯುವುದು ನನ್ನ ಚಟ ಬಿಡಿಸುವುದು ನಿನ್ನ ಹಠ ಮಕ್ಕಳಿಗೆ ನಮ್ಮಿಬ್ಬರ ಜಗಳದೂಟ ಹೆತ್ತವರಿಗೆ ಪ್ರಾಣ ಸಂಕಟ ನೆರೆಯವರಿಗೆ ಕಾಟ, ಕೆಲವರಿಗೆ ಮನರಂಜನೆಯ ನೋಟ ಸರ್ವರೋಗಕ್ಕೆ ಸಾರಾಯಿ ಮದ್ದು ಹೆಂಡತಿ ಮಕ್ಕಳಿಗೆ ವನವಾಸದ ಗುದ್ದು. ..ಕೇಶವ

ಹೊಸ_ದಿಗಂತ

ಹೇಳಿದ್ದೆ ಹೇಳಿ, ಹೇಳಿದ್ದೆ ಹೇಳಿ, ಕಾಲ ಕಳಿಬೇಡಿ, ಮಾಡಿದ್ದೆ ಮಾಡಿ, ಮಾಡಿದ್ದೆ ಮಾಡಿ, ಜೀವನ ಸವೆಸಬೇಡಿ. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕ್ಕೊಬೇಡಿ, ಅತ್ತೆ ಮಾವನ ಆಸ್ತಿಗೆ ಕಾಯ್ಕೊಂಡು ಕೂರ್ಬೇಡಿ. ಹೂಡಿ ಹೊಸ ದಿಕ್ಕಿನತ್ತ ಪಯಣ, ನೋಡಿ ಹೊಸ ದಿಗಂತದ ಕಿರಣ. ನಿಮ್ಮ ಹೊಸ ಯೋಜನೆಯ ಶಂಖು ಸ್ಥಾಪನೆ ಇಂದೇ ಮಾಡಿ, ಹೆದರಬೇಡಿ, ಮನಸ್ಸಿದ್ದರೆ ಮಾರ್ಗ, ಕನಸಿದ್ದರೆ ಸ್ವರ್ಗ. ಹೊದಿಸದಿರಿ ನಿಮ್ಮ ಕನಸಿಗೆ ಜವಾಬ್ದಾರಿಯ ಶಾಲು, ಉಸಿರಾಡಲು ಬಿಡಿ. ಅದು ತೆರೆದೀತು ನಿಮಗೆ ಹೊಸ ದಿಗಂತದ ಮಜಲು. ಹೂಡಿ ಹೊಸ ದಿಕ್ಕಿನತ್ತ ಪಯಣ, ನೋಡಿ ಹೊಸ ದಿಗಂತದ ಕಿರಣ. ......ಕೇಶವ

ಬಿದ್ದ ಮರದ ತಪ್ಪೇನು

ಬಿದ್ದ ಮರದ ತಪ್ಪೇನು, ಬೇರಿಲ್ಲದ ಮರ ಊರುವುದಾದರು ಎಷ್ಟು ದಿನ? ಗಾಳಿಯ ನೆಪ ಸಾಕು ಧರೆಗುರುಳಲು. ಇಷ್ಟು ದಿನ ನೆರಳಾಗಿದ್ದ ಮರ ಹೊರಳುವ ಮೊದಲು ಉರುಳಾಯಿತೇ? ಕೊಂದ ಪಾಪಕ್ಕೆ ಗುರಿಯಾಯಿತೇ? ವಿಧಿ ಮಾಡಿದ ಸಂಚಿಗೆ ಮರವೂ ಸೇರಿ ಹೋಯಿತು ಹಲವರ ಪ್ರಾಣ. ಹಣೆ ಬರಹ ಮರಕ್ಕೂ ಇದೆಯೇ? ಅದಕ್ಕೆ ಹೊರಬೇಕಾಯಿತೇ ಈ ಹೊಣೆ? 😞 😥 😥 ...ಕೇಶವ

ನೆಂಟರ_ಸಂಕಟ

# ನೆಂಟರ_ಸಂಕಟ ದೂರ ನಿಂತು ದೂರದಿರಿ, ಹತ್ತಿರ ಬಂದು ಹಾರದಿರಿ, ಕೆಳಗೆ ನಿಂತು ಎಳಯದಿರಿ, ಮೇಲೆ ನಿಂತು ತಿವಿಯದಿರಿ, ಜೊತೆಲೇ ಇದ್ದು ಗೊಣಗದಿರಿ, ಬುದ್ಧಿಹೇಳಿ ಅನ್ನದಿರಿ, ಮೀಡಿಯಾ ಕೆಲಸ ಮಾಡದಿರಿ, ಆಗಿ ನೀವು ಮಾದರಿ. ..ಕೇಶವ ಕಶ್ಯಪ್

ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ

ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ.. ಪಕ್ಷ ಬಂದರೆ ಬರಿ ನಿನ್ನಯ ಕೂಗೆ, ಇಲ್ಲದಿದ್ದರೆ ನೀ ಇದ್ದರು ಇಲ್ಲದ ಹಾಗೆ, ನಿನ್ನ ಬಣ್ಣ ಕಪ್ಪು ಅದರಲ್ಲೇನಿದೆ ನಿನ್ನ ತಪ್ಪು? ನೀ ಮನೆಮುಂದೆ ಕೂಗಿದರೆ ನೆಂಟರು ಬಂದಹಾಗೆ, ನೀ ನೆತ್ತಿಯ ಮೇಲೆ ಕುಟುಕಿದರೆ ಮನೆಮುಂದೆಯೇ ಹೊಗೆ. ಹಾಗೆ ಹೀಗೆ.... ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ... ಮೋಬೈಲ್ ತರಂಗಗಳಿಗೆ ಸೋತು ಹೋದೆಯೋ, ವಿದ್ಯುತ್ ತಂತಿಗಳ ಮೇಲೆ ಸತ್ತು ಹೋದೆಯೋ, ನೀರಿಲ್ಲದೆ ನಿತ್ರಾಣನಾಗಿ ಹೋದೆಯೋ, ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ..... -ಕೇಶವ (ಕೆ.ಪಿ)
ಯೋಗಿ ಇಂದ ಬಂತು ಗೋವಿಗೆ ಯೋಗ, ಕಸಾಯಿಖಾನೆಗೆ ಬೀಗ. ತ್ಯಾಗ ಜೀವಿ ಗೋವಿಗಿಲ್ಲವೆ ಚೂರು ಜಾಗ, ಬೇಗ ಹರಡಲಿ ಎಲ್ಲಾ ಕಡೆ ಇದೇ ರಾಗ