Skip to main content

#ತಾಯಿ_ಪ್ರಕೃತಿ

# ತಾಯಿ_ಪ್ರಕೃತಿ
ಮೋಡದ ಗರ್ಭದೊಳಗೆ ಮಳೆಯ ಹುಟ್ಟು,
ಭೂಮಿಯ ಗರ್ಭದೊಳಗೆ ಬೆಳೆಯ ಹುಟ್ಟು,
ತಾಯಿಯ ಗರ್ಭದೊಳಗೆ ಜೀವದ ಹುಟ್ಟು.
ಮಳೆ ಇಲ್ಲದೆ ಬೆಳೆ ಇಲ್ಲ,
ತಾಯಿ ಇಲ್ಲದೆ ಜೀವಿ ಇಲ್ಲ,
ಮಳೆ ಬೆಳೆ ಇಲ್ಲದೆ ರೈತನ ಆತ್ಮಕ್ಕೆ ಸಾವು,
ಮಕ್ಕಳ ಪ್ರೀತಿ ಇಲ್ಲದೆ ತಾಯಿಯ ಆತ್ಮಕ್ಕೆ ನೋವು.
ನೀರು ಉಳಿಸಿ ಕಣ್ಣಿನಲ್ಲಲ್ಲ,
ಪ್ರೀತಿ ಬೆಳೆಸಿ ವಸ್ತು ಮೇಲಲ್ಲ.

.....ಕೇಶವ

Comments

Popular posts from this blog

ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ

ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ.. ಪಕ್ಷ ಬಂದರೆ ಬರಿ ನಿನ್ನಯ ಕೂಗೆ, ಇಲ್ಲದಿದ್ದರೆ ನೀ ಇದ್ದರು ಇಲ್ಲದ ಹಾಗೆ, ನಿನ್ನ ಬಣ್ಣ ಕಪ್ಪು ಅದರಲ್ಲೇನಿದೆ ನಿನ್ನ ತಪ್ಪು? ನೀ ಮನೆಮುಂದೆ ಕೂಗಿದರೆ ನೆಂಟರು ಬಂದಹಾಗೆ, ನೀ ನೆತ್ತಿಯ ಮೇಲೆ ಕುಟುಕಿದರೆ ಮನೆಮುಂದೆಯೇ ಹೊಗೆ. ಹಾಗೆ ಹೀಗೆ.... ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ... ಮೋಬೈಲ್ ತರಂಗಗಳಿಗೆ ಸೋತು ಹೋದೆಯೋ, ವಿದ್ಯುತ್ ತಂತಿಗಳ ಮೇಲೆ ಸತ್ತು ಹೋದೆಯೋ, ನೀರಿಲ್ಲದೆ ನಿತ್ರಾಣನಾಗಿ ಹೋದೆಯೋ, ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ..... -ಕೇಶವ (ಕೆ.ಪಿ)

#ವೃದ್ದಾಪ್ಯ.

# ವೃದ್ದಾಪ್ಯ . ಆಯಿತು ವಯಸ್ಸು, ಮಾಗಿತು ಮನಸು, ಕರಗಿತು ಕನಸು, ಎಲ್ಲಿ ಹೋಯಿತು ಆ ನನ್ನ ಕೂಸು, ಅರಸಿ ಹೊರಟಿತೇ ಕಾಸು!! ಈ ಮುಪ್ಪಿಗೆ ಬೇಕಂತೆ ನಿನ್ನ ಅಪ್ಪುಗೆ, ಈ ವೃದ್ದಾಪ್ಯ ಬಯುಸುತಿದೆ ನಿನ್ನ ಸಾನಿಪ್ಯ ಎಲ್ಲಿರುವೆ, ಹೇಗಿರುವೆ, ಬಂದು ಬಿಡು ಮಗು, ಕಾಣಬೇಕೆನಿಸುತಿದೆ ನಿನ್ನ ಮುದ್ದು ನಗು. ಬಿಟ್ಟು ಬಿಡು ಆ ವಿದೇಶದ ಒಲವು, ಸೇರಿ ನಲಿಯೋಣ ಸಾಯುವ ಮುನ್ನ ಗಂಟೆಗಳಾದರು ಕೆಲವು. ಕೇಳಿಸುತ್ತಿಲ್ಲವೇ ನಿನಗೆ ಈ ಕರುಳಿನ ಕರೆ, ಕಾಯುತಿರುವೆ ನಿನಗಾಗಿ ಬಿಗಿಹಿಡಿದು ಉಳಿದಿರುವ ಈ ಉಸಿರಿನ ಕೊರೆ. --ಕೇಶವ

#ಜಿಜ್ಞಾಸೆ

# ಜಿಜ್ಞಾಸೆ ಪ್ರಾಣ ಹಿಂಡುತಿದೆ ಕಾಣದ ಕೈಗಳು, ಹೃದಯ ಕಲಕುತಿದೆ ಮರೆಯದ ನೆನಪುಗಳು. ಕನಸು ತಿವಿಯುತಿದೆ ತೀರದ ಆಸೆಗಳು, ಇರುವುದನ್ನು ಇಷ್ಟಪಡಲೇ? ಸಿಗದುದ್ದಕ್ಕೆ ಕಷ್ಟಪಡಲೇ?.... .....ಕೇಶವ